ಪ್ರಭೂ ಈ ಬಾಳಿನಲ್ಲಿ ನನ್ನದೇನಿದೆ?

ಪ್ರಭೂ ಈ ಬಾಳಿನಲ್ಲಿ ನನ್ನದೇನಿದೆ?
ಎಲ್ಲ ನೀನೆ ನೀಡಿದ ಕೃಪೆಗಳಾಗಿವೆ.

ಬಾಳಿಗೊಂದು ಪಾಯವಾಗಿ ಸಿಕ್ಕ ಮನೆತನ
ಸುತ್ತ ಎದ್ದ ಬೇಲಿ ಬಳ್ಳಿ ಮಣ್ಣ ಕಣ ಕಣ,
ಆಗ ಈಗ ಭೇಟಿಕೊಟ್ಟ ನಾಲ್ಕು ಮಳೆ ಹನಿ
ಬಿಸಿಲ ತಾಪದಲ್ಲಿ ಉಳಿದು ಬಂದ ಬೆಳೆ ಹನಿ.

ಪಡೆದ ಪತ್ನಿ ಮಕ್ಕಳೊಡನೆ ಸರಳ ಜೀವನ
ಆಗದವರು ನೀಡಿದ ಉರಿಯ ಬಾಗಿನ,
ಮಧ್ಯದಲ್ಲಿ ಅಲ್ಲಲ್ಲೇ ಮುಳ್ಳು ಮುತ್ತುಗ
ನೂರು ಚೂರಿಕಲ್ಲು ಚುಚ್ಚಿ ಕಾಲು ಧಗಧಗ.

ಎಷ್ಟೆ ರಕ್ತ ಸುರಿದರೂ ಬಾಳು ಇಷ್ಟವು
ಇದನು ಎಸೆದು ಹೋಗಲು ಮನಸು ಒಪ್ಪದು,
ಕೊಟ್ಟುದೆಲ್ಲ ತಾಳಿ ನಿಂತ ನಿನ್ನ ಭಕ್ತನ
ಕಾಣದವನೆ ಕಾಯೊ ನೀಡಿ ಊರೆಗೋಲನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೬೫
Next post ಅಂತರಗಂಗೆ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

cheap jordans|wholesale air max|wholesale jordans|wholesale jewelry|wholesale jerseys